Quantcast
Channel: Kannada Music Reviews ಕನ್ನಡ ಚಲನಚಿತ್ರ ಹಾಡುಗಳು – FilmiBeat Kannada
Viewing all 136958 articles
Browse latest View live

ಪತ್ನಿಗೆ ಸವಾಲು ಹಾಕಿ ಗೆದ್ದ ನಿರ್ದೇಶಕ ಮೋಹನ್.!

$
0
0
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್ ಮೊನ್ನೆ ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಮತ್ತು ಶರಣ್. ಹೀಗೆ ಕನ್ನಡದ ಹೆಸರಾಂತ ಹೀರೋಗಳು ಗಾಯಕರಾಗಿರುವುದು ನಿಮಗೆ ಗೊತ್ತು. ತೆರೆಮೇಲೆ ಆಕ್ಷನ್ ಮಾಡುವುದರೊಂದಿಗೆ ಹಾಡೊಂದಕ್ಕೆ ಗಾನಸುಧೆ ಹರಿಸುತ್ತಿರುವ ನಾಯಕರ ಪಟ್ಟಿಗೆ ನಿರ್ದೇಶಕ ಕಮ್ ನಟ ಮೋಹನ್ ಸೇರ್ಪಡೆಯಾಗಿರುವ ಸುದ್ದಿ ಕೂಡ

ಪುನೀತ್ 'ರಣವಿಕ್ರಮ'ನಿಗೆ ಲಹರಿ ವೇಲು ನೋಟಿಸ್

$
0
0
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರ ಏಪ್ರಿಲ್ ನಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಆದರೆ ಈ ಚಿತ್ರದಲ್ಲಿನ ಒಂದು ರಿಮಿಕ್ಸ್ ಹಾಡು ಕಾಪಿರೈಟ್ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಲಹರಿ ಆಡಿಯೋ ಸಂಸ್ಥೆ ಚಿತ್ರದ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಿಗೆ ನೋಟಿಸ್ ಕಳುಹಿಸಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ರಣರಂಗ'

ಪತ್ನಿ ಎದುರು ಪೇಚಿಗೆ ಸಿಲುಕಿದ ನಿರ್ದೇಶಕ ಮೋಹನ್.!

$
0
0
ಮೊದಲು ನಟನಾಗಿ ಎಲ್ಲರಿಗೂ ಕಚಗುಳಿ ಇಡುತ್ತಿದ್ದ ನಟ ಮೋಹನ್, ಇದೀಗ ನಿರ್ಮಾಪಕ ಮತ್ತು ನಿರ್ದೇಶಕ. 'ಮಳೆ ನಿಲ್ಲುವವರೆಗೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಪಕರೂ ಆಗಿರುವ ಮೋಹನ್, ಚಿತ್ರದ ಹಾಡೊಂದಕ್ಕೆ ದನಿಯಾಗಿ ಆಲ್ ರೌಂಡ್ ಪರ್ಫಾಮೆನ್ಸ್ ನೀಡಿದ್ದಾರೆ. ಮೋಹನ್ ಮಾತ್ರ ಅಲ್ಲ, 'ಮಳೆ ನಿಲ್ಲುವವರೆಗೆ' ಚಿತ್ರದಲ್ಲಿ ಮೋಹನ್ ಪತ್ನಿ ಶ್ರೀವಿದ್ಯಾ ಕೂಡ ಹಾಡಿದ್ದಾರೆ. ''ಕಲ್ಲಿದು

'ರಣವಿಕ್ರಮ'ನ ವಿರುದ್ಧ ಕೋರ್ಟ್ ಬಾಗಿಲು ತಟ್ಟಿದ ಲಹರಿ ವೇಲು

$
0
0
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ 'ರಣವಿಕ್ರಮ' ಚಿತ್ರ ಈಗ ಕಾನೂನು ಸಮರವನ್ನ ಎದುರಿಸುವ ಪರಿಸ್ಥಿತಿ ಉಂಟಾಗಿದೆ. 'ರಣವಿಕ್ರಮ' ಚಿತ್ರದ ಎರಡು ಹಾಡುಗಳಲ್ಲಿ ಕಾಪಿರೈಟ್ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಲಹರಿ ವೇಲು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಕಳೆದ ವಾರವಷ್ಟೇ ಈ ವಿಚಾರಕ್ಕೆ ಸಂಬಂಧಪಟ್ಟಂತೆ

''ತಾಳೆ ಹೂವ ಪೊದೆಯಿಂದ..'' ರೀಮಿಕ್ಸ್ ಹಾಡು ನೋಡಿದ್ದೀರಾ?

$
0
0
'ಖೈದಿ' ಅಂದಕೂಡಲೆ ಕನ್ನಡ ಸಿನಿ ಪ್ರಿಯರಿಗೆ ತಕ್ಷಣ ನೆನಪಾಗುವುದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಮತ್ತು ''ತಾಳೆ ಹೂವ ಪೊದೆಯಿಂದ...'' ಹಾಡು. 1984ರಲ್ಲಿ ತೆರೆಕಂಡ 'ಖೈದಿ' ಸಿನಿಮಾ ಅಭೂತಪೂರ್ವ ಯಶಸ್ಸು ದಾಖಲಿಸಿತ್ತು. ಈಗ ಇದೇ ಹೆಸರಲ್ಲಿ 'ಸೈಕೋ' ಖ್ಯಾತಿಯ ಧನುಷ್ ಸಿನಿಮಾ ಮಾಡುತ್ತಿರುವ ಸಂಗತಿಯನ್ನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿ ತಿಳಿದುಕೊಂಡಿದ್ದೀರಾ. ಇದೇ ಚಿತ್ರದ ಮತ್ತೊಂದು ವಿಶೇಷತೆಯನ್ನ ನೋಡುವ ಅವಕಾಶ

ಪುನೀತ್ ರಾಜ್ ಕುಮಾರ್ ಲವ್ವು ನೀರು ಪಾಲಾದಾಗ...

$
0
0
ಲವ್ ಮಾಡೋರಿಗೆ ಈಗ ಸುಲಭ. ಮೀಟಿಂಗ್-ಡೇಟಿಂಗ್ ಕನೆಕ್ಟ್ ಮಾಡುವುದಕ್ಕೆ ವಾಟ್ಸ್ ಆಪ್, ಜಿ-ಮೇಲ್, ವೀ ಚಾಟ್ ಎಲ್ಲಾ ಇದೆ. ಆದ್ರೆ, ಕೆಲವೇ ಕೆಲವು ವರ್ಷಗಳ ಹಿಂದೆ ಲೆಟರ್ ಒಂದು ಬಿಟ್ಟರೆ ಬೇರೇನೂ ಇರ್ಲಿಲ್ಲ. ಅಂದಕಾಲತ್ತಿಲ್, ತನಗಾಗಿ ಕಾಯ್ತಿದ್ದ ಪ್ರೇಯಸಿಗೆ ಲವ್ ಲೆಟರ್ ಬರೆದು ಬಿಳಿ ಪಾರಿವಾಳ ಕಾಲಿಗೆ ಕಟ್ಟಿ ಕಳುಹಿಸಿದ ಅಪ್ಪು ಪ್ರೇಮ ಪತ್ರ ನೀರು

ಕಿಚ್ಚ ಸುದೀಪ್ ಗೆ ಟೆಂಪರೇಚರ್ ರೈಸ್ ಆದಾಗ.....

$
0
0
ಕಿಚ್ಚ ಸುದೀಪ್ ಗೆ ಹೆಸರಲ್ಲೇ ಕಿಚ್ಚಿದೆ. ಕೆಣಕಿದವರು ಯಾರೇ ಆದರೂ ಸರಿ, ಟೆಂಪರ್ ರೈಸ್ ಮಾಡಿಕೊಂಡು ತರಾಟೆ ತೆಗೆದುಕೊಳ್ಳುವವರೆಗೂ ಸುಮ್ನೆ ಬಿಡಲ್ಲ. ಇದನ್ನ ಹಲವಾರು ಸಿನಿಮಾಗಳಲ್ಲಿ ನೀವೆಲ್ಲಾ ನೋಡಿದ್ದೀರಾ. ಆದ್ರೆ, ಈ ಬಾರಿ ಸುದೀಪ್ ಟೆಂಪರೇಚರ್ ರೈಸ್ ಮಾಡಿಕೊಂಡಿರೋದು ಖೇಡಿಗಳಿಂದಲ್ಲ. ಬದಲಾಗಿ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ನಿಂದ. ತೆಳುವಾದ ಸೀರೆಯುಟ್ಟು ರಚಿತಾ ರಾಮ್,

ಯುಕೆ, ಯುಎಸ್ ನಲ್ಲಿ ಅರ್ಜುನ್ ಜನ್ಯ ಸಂಗೀತ ಸುಧೆ

$
0
0
ಸ್ಯಾಂಡಲ್ ವುಡ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ಹೊರದೇಶಗಳಲ್ಲಿ ಸಂಗೀತ ಕಚೇರಿ ನಡೆಸಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಅರ್ಜುನ್ ಜನ್ಯ ಗಾನಗೋಷ್ಠಿ ಯುಎಸ್ ಹಾಗೂ ಯುಕೆಯಲ್ಲಿ ಮೊಳಗಲಿದೆ. ಇದು ಅರ್ಜುನ್ ಜನ್ಯ ಹಾಗೂ ಅವರ ಅಭಿಮಾನಿಗಳ ಪಾಲಿಗೆ ಮರೆಯಲಾಗದ ರಸಗಳಿಗೆ. ಈ ಗಾನಗೋಷ್ಠಿಯ ವಿಶೇಷ ಎಂದರೆ ಬೇರೆಯವರು ಸಂಗೀತ ಸಂಯೋಜಿಸಿರುವ ಹಾಡುಗಳನ್ನೂ

'ರಥಾವರ' ಚಿತ್ರಕ್ಕೆ ಶ್ರೀಮುರಳಿ ಗಾನಬಜಾನ

$
0
0
ನಾಯಕರು ಗಾಯಕರಾಗುತ್ತಿರುವುದು ಗಾಂಧಿನಗರದ ಹೊಸ ಟ್ರೆಂಡ್. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ರಿಂದ ಹಿಡಿದು ಇತ್ತೀಚೆಗಿನ ಯಶ್, ಶರಣ್ ವರೆಗೂ ಬಹುತೇಕ ತಾರೆಯರು ಗಾನಸುಧೆ ಹರಿಸಿದ್ದಾರೆ. ಈಗ ಶ್ರೀಮುರಳಿಯ ಸರದಿ. 'ಉಗ್ರಂ' ಸೂಪರ್ ಹಿಟ್ ಆದ್ಮೇಲೆ 'ರಥಾವರ' ಚಿತ್ರದಲ್ಲಿ ಅಭಿನಯಿಸುತ್ತಿರುವ ಶ್ರೀಮುರಳಿ, ಅದೇ ಚಿತ್ರದ

ಏಪ್ರಿಲ್ 16 ರಂದು 'ರನ್ನ'ನ ಚಿನ್ನದಂಥ ಹಾಡುಗಳು ಬಿಡುಗಡೆ

$
0
0
ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇದೇ ವಾರ ನಡೆಯಲಿದೆ. ಹಾಗಂತ 'ರನ್ನ' ಚಿತ್ರತಂಡ ಹೇಳಿಕೊಂಡಿದೆ. ವಿದೇಶದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ರನ್ನ' ಟೀಮ್ ಕೆಲ ದಿನಗಳ ಹಿಂದೆಯಷ್ಟೇ ಕುಂಬಳಕಾಯಿ ಹೊಡೆಯಿತು. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ರನ್ನ' ಚಿತ್ರದ ಹಾಡುಗಳು ಏಪ್ರಿಲ್ 16 ರಂದು ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ.

ಶಿವಣ್ಣ 'ವಜ್ರಕಾಯ' ಹಾಡುಗಳಿಗೂ ಬಂದ್ ಬಿಸಿ

$
0
0
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ವಜ್ರಕಾಯ'. 'ಭಜರಂಗಿ' ಸಿನಿಮಾ ನಂತರ ಎ.ಹರ್ಷ ಮತ್ತು ಶಿವಣ್ಣ ಒಂದಾಗಿರುವುದು 'ವಜ್ರಕಾಯ'ದಲ್ಲಿ. ಆದ್ದರಿಂದ ಸಿನಿಮಾದ ಬಗ್ಗೆ ಎಕ್ಸ್ ಪೆಕ್ಟೇಷನ್ಸ್ ಕೊಂಚ ಜಾಸ್ತಿ ಇದೆ. ಇತ್ತೀಚೆಗಷ್ಟೇ ಇಟಲಿಯಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ವಜ್ರಕಾಯ' ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ತಲುಪಿದೆ. ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವುದಕ್ಕೆ ಓಡಾಡುತ್ತಿರುವ

ಶಿವರಾಜ್ ಕುಮಾರು ಮಿಸ್ಸಿಗೆ ಢಮಾರು...ಕೇಳಣ್ಣೋ...

$
0
0
''ಶಿವರಾಜ್ ಕುಮಾರು ಕಿಸ್ಸಿಗೆ ಢಮಾರು...ಕೇಳಣ್ಣೋ...''. ಸೂಪರ್ ಹಿಟ್ 'ಓಂ' ಸಿನಿಮಾದ ಈ ಜನಪ್ರಿಯ ಸಾಲುಗಳನ್ನ ಹೇಗೆ ತಾನೆ ಮರೆಯೋಕೆ ಸಾಧ್ಯ ಹೇಳಿ. ಹಂಸಲೇಖ ಸಂಗೀತ ಸಂಯೋಜನೆಯ ''ಕೋಮಾ...ಪೇಮಾ...'' ಹಾಡು ಇಂದಿಗೂ ಅನೇಕ ಯುವಕರ ಪಾಲಿಗೆ ಸುಪ್ರಭಾತ. ಈಗ ಯಾಕೆ ಈ ಹಾಡಿನ ಸುದ್ದಿ ಅಂದ್ರೆ, ಅಂದು ಕಿಸ್ಸಿಗೆ ಢಮಾರ್ ಆಗಿದ್ದ ಶಿವಣ್ಣ ಇಂದು ಮಿಸ್ಸಿಗೆ ಢಮಾರ್

ಗುರುಕಿರಣ್ ಅವರಿಗೆ ಮಧ್ಯರಾತ್ರಿ 'ಲವ್ ಮೂಡಿತಣ್ಣ'

$
0
0
ಆರಂಭ ಚಿತ್ರದ "ಲವ್ ಮೂಡಿತಣ್ಣ..." ಹಾಡು ಹುಟ್ಟಿದ ರೀತಿಯ ಬಗ್ಗೆ ಚಿತ್ರದ ನಿರ್ದೇಶಕ ಎಸ್. ಅಭಿ ಹನಕೆರೆ ಅವರು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರೀತಿ ಮೂಡುವ ಸಂದರ್ಭಕ್ಕೆ ತಕ್ಕಂತೆ ಒಂದು ಹಾಡಿಗೆ ಟ್ಯೂನ್ ಹಾಕಲು ಗುರುಕಿರಣ್ ಅವರ ಜೊತೆ ಕುಳಿತುಕೊಂಡಾಗ ಗುರುಕಿರಣ್ ಅನೇಕ ಟ್ಯೂನುಗಳನ್ನು ಮಾಡಿದರು. ಅದರಲ್ಲಿ ಒಂದು ಇಷ್ಟವಾಗಿ, ಅದರ ಮೇಲೆ ಎರಡು ತಿಂಗಳು ಕೆಲಸ

ಹೆಡ್ ಫೋನ್ ಹಾಕ್ಕೊಳ್ಳಿ...'ರನ್ನ' ಎಲ್ಲಾ ಹಾಡು ಕೇಳಿ...

$
0
0
ಕಡೆಗೂ ಕಿಚ್ಚ ಸುದೀಪ್ ಅಭಿಮಾನಿಗಳು ಕುಣಿದು ಕುಪ್ಪಳಿಸುವ ಸಮಯ ಬಂದೇ ಬಿಟ್ಟಿದೆ. 'ರನ್ನ'ನ ಚಿನ್ನದಂಥ ಹಾಡುಗಳನ್ನ ಕೇಳಿ ಆನಂದಿಸಬೇಕು ಅಂತ ತಿಂಗಳುಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್. ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರನ್ನ' ಆಡಿಯೋ ಇಂದು ರಿಲೀಸ್ ಆಗಿದೆ. ಆಗಲೇ ಯೂಟ್ಯೂಬ್ ನಲ್ಲಿ 'ರನ್ನ'ನ ಎಲ್ಲಾ ಹಾಡುಗಳು ಬಿಡುಗಡೆಯಾಗಿವೆ.

ಹುಚ್ಚ ವೆಂಕಟ್ ಫ್ಯಾನ್ಸ್ ಹಾಡು; ಮಸ್ತ್ ಮಜಾ ಮಾಡಿ

$
0
0
ಮಾಡಿದ ಸಿನಿಮಾಗಿಂತ ಹೆಚ್ಚಾಗಿ ಮಾಡಿಕೊಂಡ ಎಡವಟ್ಟುಗಳಿಂದಲೇ ಜನಪ್ರಿಯತೆ ಪಡೆದಿರುವ ನಟ ಕಮ್ ಗಾಂಧಿನಗರದ ಆಲ್ ರೌಂಡರ್ ಹುಚ್ಚ ವೆಂಕಟ್. ಯೂಟ್ಯೂಬ್ ನಲ್ಲಿ ಸೆಲೆಬ್ರೇಟಿಗಳಿಗಿಂತಲೂ ಹೆಚ್ಚು ಸೆನ್ಸೇಷನ್ ಹುಟ್ಟುಹಾಕಿದ ಹುಚ್ಚ ವೆಂಕಟ್ ಈಗೆಲ್ಲಿದ್ದಾರೋ ಗೊತ್ತಿಲ್ಲ. ಆದ್ರೆ, ಅವರ ಅಭಿಮಾನಿಗಳು ಮಾತ್ರ ಬೇಜಾನ್ ಸೌಂಡ್ ಮಾಡ್ತಿದ್ದಾರೆ. [ಜನಪ್ರಿಯ ಕನ್ನಡ ಟಿವಿ ವಾಹಿನಿಗಳಿಗೆ ಧಮ್ಕಿ ಹಾಕಿದ ಹುಚ್ಚ ವೆಂಕಟ್]

'ಈ ಹೃದಯ ಹಾಡಿದೆ' ವಿಷ್ಣು ವಿಶೇಷ ಸಂಗೀತ ಸಂಜೆ

$
0
0
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಗೀತೆಗಳೆಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. 'ವಿಷ್ಣುಸೇನೆ' ಚಿತ್ರದಲ್ಲಿ "ಅಭಿಮಾನಿಗಳೇ ನನ್ನ ಪ್ರಾಣ.." ಎಂದು ಹಾಡುವ ಮೂಲಕ ಅವರ ಹೃದಯ ಸಿಂಹಾಸವನ್ನು ನೇರವಾಗಿ ಅಲಂಕರಿಸಿದ ಕಲಾವಿದ ವಿಷ್ಣುದಾದಾ. ವಿಷ್ಣು ಅವರ ಕಂಠಸಿರಿಯಲ್ಲಿ ಹಲವಾರು ಗೀತೆಗಳು ಮೂಡಿಬಂದಿವೆ. ಅವುಗಳಲ್ಲಿ ಪ್ರಮುಖವಾಗಿ 'ಸಾಹಸಸಿಂಹ' ಚಿತ್ರದ ಹೇಗಿದ್ದರೂ ನೀನೇ ಚೆನ್ನ, 'ಜಿಮ್ಮಿ ಗಲ್ಲು' ಚಿತ್ರದ ತುತ್ತು ಅನ್ನ

ಪವನ್ ಕಲ್ಯಾಣ್ ಚಿತ್ರದಲ್ಲಿ ಸುದೀಪ್ 'ಬಬ್ಬರ್ ಶೇರ್'

$
0
0
ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರದ ಆಡಿಯೋ ನಿನ್ನೆಯಷ್ಟೇ (ಏಪ್ರಿಲ್ 16) ಹೊರಬಂದಿದೆ. 'ರನ್ನ'ನ ಹಾಡುಗಳನ್ನ ಕೇಳಿ ಕಿಚ್ಚನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹೀಗಿರುವಾಗಲೇ, ಸುದೀಪ್ ಫ್ಯಾನ್ಸ್ ಸಂತಸ ಪಡುವ ಮತ್ತೊಂದು ಸುದ್ದಿ ಹೊರಬಿದ್ದಿದೆ. 'ರನ್ನ' ಚಿತ್ರದಲ್ಲಿನ ಸುದೀಪ್ ಇಂಟ್ರೋಡಕ್ಷನ್ ಸಾಂಗ್ ನೀವು ಕೇಳಿದ್ದೀರಾ. ''ಜಂಗಲೇ ಮೇ ಸಿಂಗಲ್ ಶೇರ್....ನಾಮ್ ಹೇ ಉಸ್ಕಾ ಬಬ್ಬರ್

ಅಣ್ಣಾವ್ರ ಹುಟ್ಟುಹಬ್ಬ ವಿಶೇಷ ರಸಮಂಜರಿ ಕಾರ್ಯಕ್ರಮ

$
0
0
ವರನಟ, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬಕ್ಕೆ (ಏಪ್ರಿಲ್ 24) ಇನ್ನು ಕೇವಲ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈ ಬಾರಿಯ ಹುಟ್ಟುಹಬ್ಬಕ್ಕೆ ಹಲವಾರು ಕಾರ್ಯಕ್ರಮಗಳು ಅಭಿಮಾನಿ ದೇವರುಗಳಿಗೆ ಕಾದಿವೆ. ಪ್ರತಿವರ್ಷ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ರಕ್ತದಾನ, ನೇತ್ರದಾನದಂತಹ ಮಹತ್ವದ ಕೆಲಸಗಳಲ್ಲಿ ಭಾಗಿಯಾಗುತ್ತಿರುವುದು ಗೊತ್ತೇ ಇದೆ. ಈ ಬಾರಿಯ ಹುಟ್ಟುಹಬ್ಬವನ್ನು ಮತ್ತಷ್ಟು

ಸುದೀಪ್ ಅಭಿನಯದ ’ರನ್ನ’ ಧ್ವನಿಸುರುಳಿ ವಿಮರ್ಶೆ

$
0
0
ವಿಕ್ಟರಿ, ಅಧ್ಯಕ್ಷದಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ನಂದ ಕಿಶೋರ್ ಈ ಬಾರಿ ಅಭಿನಯ ಚಕ್ರವರ್ತಿ ಸುದೀಪ್ ರವರ ಜೊತೆ 'ರನ್ನ' ಸಿನಿಮಾದ ಮೂಲಕ ತೆರೆಗೆ ಅಪ್ಪಳಿಸಲು ತಯಾರಾಗಿ ಬರುತ್ತಿದ್ದಾರೆ. ಬಹು ದಿನಗಳ ನಂತರ ಬರುತ್ತಿರುವ ಕಿಚ್ಚ ಸುದೀಪ್ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳ ಕಾತರ ನಿರೀಕ್ಷೆ ಸಹಾ ಮುಗಿಲು ಮುಟ್ಟಿದೆ. ಚಿತ್ರದ ಟೀಸರ್, ಟ್ರೈಲರ್ ಗಳು

ಎಸ್ ಜಾನಕಿ ಅವರ ಯಾವ ಕನ್ನಡ ಹಾಡು ನಿಮಗಿಷ್ಟ?

$
0
0
'ದಕ್ಷಿಣ ಭಾರತದ ಹಾಡುಹಕ್ಕಿ' ಎಂದೇ ಕರೆಸಿಕೊಂಡಿರುವ ಎಸ್ ಜಾನಕಿ ಅವರನ್ನು ನೆನಪು ಮಾಡಿಕೊಳ್ಳಲು ಇದಕ್ಕಿಂತಲೂ ಸುದಿನ ಇನ್ನೊಂದಿಲ್ಲ. ಏಕೆಂದರೆ ಅವರಿಗೆ ಇಂದು (ಏ.23) ಹುಟ್ಟುಹಬ್ಬ. ಗಾನ ಕೋಗಿಲೆ, ಗಾನ ಸರಸ್ವತಿ, ಗಾನ ಸಾಮ್ರಾಜ್ಞಿಗೆ ಇಂದು 77ನೇ ಜನುಮದಿನ. ಎಸ್ ಜಾನಕಿ ಅವರ ದೇಹಕ್ಕೆ ವಯಸ್ಸಾಗಿದ್ದರೂ ಕಂಠಕ್ಕೆ ಮಾತ್ರ ಇನ್ನೂ 20 ಪ್ರಾಯ. ಅವರ ಕಂಠಸಿರಿಗೆ ಮಾರುಹೋಗದವರಿಲ್ಲ.
Viewing all 136958 articles
Browse latest View live




Latest Images